ದ್ಯಾಮಮ್ಮ ದೇವಿ ಕ್ರಿಯೇಷನ್ಸ್ ಲಾಂಛನದಲ್ಲಿ ನಾಮದೇವ ಭಟ್ಟರ್ ನಿರ್ಮಿಸುತ್ತಿರುವ ತಲೆಬಾಚ್ಕೋಳ್ಳಿ ಪೌಡರ್ ಹಾಕೊಳ್ಳಿ ಚಿತ್ರವು ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಜೀವನದಲ್ಲಿ ಬೇಸರದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಯುವಕರ ಜೀವನದಲ್ಲಿ ನಡೆಯುವಂತಹ ಘಟನೆಗಳನ್ನು, ಹಾಸ್ಯದ ಮೂಲಕ ಹೇಳಲಿದ್ದಾರೆ.
ಎ.ವೇಣುಗೋಪಾಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿಜಯಭಾರತಿ ಸಂಗೀತ, ಮನು ಯಪ್ಲರ್ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ತ್ರಿಭುವನ್ ನೃತ್ಯ ನಿರ್ದೇಶನ, ಮಾದೇಶ್ ಮುತ್ತಪ್ಪ ಸಂಭಾಷಣೆ, ಸ್ಟಂಟ್ ಸಿದ್ದು ಸಾಹಸ, ಶಿವು ಜಮಖಂಡಿ ಸಾಹಿತ್ಯ, ಶ್ರೀನಿವಾಸ್ ಕುಮಾರ್ ಸಹ ನಿರ್ದೇಶನವಿದೆ. ವಿಕ್ರಂ ಆರ್ಯ, ಚಿಕ್ಕಣ್ಣ, ನಿಖಿತಾ, ಅಮಾನ್ಗ್ರೇವಲ್, ಶೋಭರಾಜ್, ಬುಲೆಟ್ ಪ್ರಕಾಶ್, ಉಮೇಶ್, ಹೊನ್ನವಳ್ಳಿ ಕೃಷ್ಣ, ಮನಮೋಹನ್ರೈ, ಕಿಂಗ್ ಮೋಹನ್, ಮೂಗ್ ಸುರೇಶ್, ಬಸವರಾಜ್ ಮುಂತಾದವರ ತಾರಬಳಗವಿದೆ.